ಬ್ಯಾನರ್ಜಿ ಅವರು ತಮಗೆ ಗುರುವಾರ ಬರೆದ ಪತ್ರವನ್ನು ಉಲ್ಲೇಖಿಸಿದ ಧನ್ಖರ್, ʼನಾನು ಸರ್ಕಾರದ ಆಡಳಿತದಲ್ಲಿ ಪದೇ ಪದೇ ಮಧ್ಯಪ್ರವೇಶಿಸುತ್ತಿದ್ದೇನೆ ಎಂದು ಅವರು ಆರೋಪ ಮಾಡಿರುವುದು ವಿಷಯದಿಂದ ಗಮನ ಬೇರೆಡೆ ಸೆಳೆಯುವ ತಂತ್ರವಾಗಿದೆ. ರಾಜ್ಯದಲ್ಲಿ ಕೋವಿಡ್-19 ಪಿಡುಗು ನಿರ್ವಹಿಸುವಲ್ಲಿ ತಾವು ವಿಫಲರಾಗಿರುವುದನ್ನು ಮರೆಮಾಚಲು ಅವರು ಹೀಗೆ ಮಾಡಿದ್ದಾರೆʼ ಎಂದು ಹೇಳಿದ್ದಾರೆ.