ನಾಪತ್ತೆಯಾಗಿದ್ದ ಮಂಜುವರ್ಮಾ ಬಂಧಿಸುವಂತೆ ಸುಪ್ರೀಂಕೋರ್ಟ್ ನವೆಂಬರ್ 12ರಂದು ಬಿಹಾರ ಡಿಜಿಪಿ ಅವರಿಗೆ ತಾಕೀತು ಮಾಡಿತ್ತು. ಕೋರ್ಟ್ ನಿರ್ದೇಶನ ಪಡೆದು, ಮಾಜಿ ಸಚಿವರಿಗೆ ಸೇರಿದ ಮನೆ, ಆಸ್ತಿಯನ್ನು ಪೊಲೀಸರು ಜಪ್ತಿ ಮಾಡಿದ್ದರು. ವರ್ಮಾ ಅವರನ್ನು ಆಡಳಿತಾರೂಢ ಜೆಡಿಯು ರಕ್ಷಿಸುತ್ತಿದೆ ಎಂದು ಆರ್ಜೆಡಿ ಆರೋಪಿಸಿತ್ತು. ಆದರೆ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದುಜೆಡಿಯು ತಿರುಗೇಟು ನೀಡಿತ್ತು.