ಬೆಂಗಳೂರು: ಸ್ವೀಡನ್ನಲ್ಲಿ ಇದೇ 29ರಿಂದ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸುವ ಭಾರತ ತಂಡಕ್ಕೆ ಧಾರವಾಡದ ಟಿ.ಜಿ. ಉಪಾಧ್ಯೆ ಅವರು ವ್ಯವಸ್ಥಾಪಕರಾಗಿ ನೇಮಕವಾಗಿದ್ದಾರೆ.
ಅವರು ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೆಟಿಟಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟೂರ್ನಿಯು ಮೇ 6ರವರೆಗೆ ನಡೆಯಲಿದೆ. ಅಚಂತ ಶರತ್ ಕಮಲ್, ಸತ್ಯನ್, ಮಣಿಕಾ ಬಾತ್ರಾ ಅವರು ತಂಡದಲ್ಲಿದ್ದಾರೆ.