ಅಕ್ಷರಸ್ಥರು ವಿದ್ಯಾವಂತರಾಗಬೇಕು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಟ್ವೀಟ್ ಮಾಡಿರುವ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು, ‘ಅಕ್ಷರಸ್ಥರು ವಿದ್ಯಾವಂತರಾಗಬೇಕು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಅವಕಾಶಗಳನ್ನು ನೀಡುವುದು ಪೌರತ್ವ ತಿದ್ದುಪಡಿ ಕಾಯ್ದೆಯ ನಿಖರ ಕಾರಣ. ಅಮೆರಿಕಾದಲ್ಲಿ ಯಾಜಿದಿಗಳ ಬದಲಿಗೆ ಸಿರಿಯಾ ಮುಸ್ಲಿಮರಿಗೆ ಇಂತಹ ಅವಕಾಶಗಳನ್ನು ನೀಡಿದರೆ ಹೇಗಾಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.