ಪ್ರಧಾನಿ ಅವರು 18ರಂದು ಬೆಳಿಗ್ಗೆ ಚಿಕ್ಕೋಡಿಯಲ್ಲಿ ಹಾಗೂ ಮಧ್ಯಾಹ್ನದ ನಂತರ ಗಂಗಾವತಿಯಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಎರಡೂ ಸಭೆಗಳು ಸಂಜೆ 5ರೊಳಗೆ ಮುಗಿಯಲಿವೆ. ಇದು ಪಕ್ಷದ ಚುನಾವಣಾ ಕಾರ್ಯತಂತ್ರದ ಭಾಗ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು. ಚಿಕ್ಕೋಡಿ, ಕೊಪ್ಪಳ ಸೇರಿದಂತೆ 14 ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ.