ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಸಬಲ್ಘರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈಜನಾಥ್ ಕುಶ್ವಾ ಅವರನ್ನು ಡಾಬಾವೊಂದಕ್ಕೆ ಕರೆದುಕೊಂಡು ಹೋಗಿ ಬಿಜೆಪಿಯ ಮಾಜಿ ಸಚಿವರಾದ ನರೋತ್ತಮ ಮಿಶ್ರಾ ಹಾಗೂ ವಿಶ್ವಾಸ್ ಸಾರಂಗ್ ಅವರೊಂದಿಗೆ ಭೇಟಿ ಮಾಡಿಸಿದ್ದಾರೆ. ಅವರು ನಮ್ಮ ಶಾಸಕನಿಗೆ ನೂರು ಕೋಟಿ ರೂಪಾಯಿ ಆಮಿಷಒಡ್ಡಿರುವುದಲ್ಲದೆ ಬಿಜೆಪಿ ಸರ್ಕಾರ ರಚನೆಯಾದರೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದಾರೆ ಎಂದು ದಿಗ್ವಿಜಯ್ಸಿಂಗ್ ಮಾಧ್ಯಮಗಳಿಗೆತಿಳಿಸಿದ್ದಾರೆ.