ಕೋಲ್ಕತ್ತ: ಅಲ್ಪ ಸಂಖ್ಯಾತರ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ.
ನಿಮಗೆ ಪಾಕಿಸ್ತಾನದೊಂದಿಗೆ ಇಲೂ ಇಲೂ (ILU, ILU- I LOVE YOU) ಮಾಡಬೇಕಿದ್ದರೆ ಮಾಡಿ, ಆದರೆ ನಾವುಪಾಕಿಸ್ತಾನಕ್ಕೆ ಬುಲೆಟ್ನಿಂದಲೇ ಉತ್ತರಿಸುತ್ತೇವೆ ಎಂದಿದ್ದಾರೆ ಶಾ.
BJP is committed to implement the NRC at the national level and accord citizenship to the Hindu, Buddhist, Sikh, Jain and Christian refugees belonging to the religious minorities from the neighbouring countries: Shri @AmitShah#BharatBoleNaMoNaMopic.twitter.com/S6yeCi2crr
ಸೋಮವಾರ ಕೃಷ್ಣಾನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅರ್ಟಿಕಲ್ 370ನ್ನು ನಾವು ರದ್ದು ಮಾಡುತ್ತೇವೆ ಮತ್ತು ದೇಶದೆಲ್ಲೆಡೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ42 ಸೀಟುಗಳಲ್ಲಿ 23ಕ್ಕಿಂತಲೂ ಹೆಚ್ಚು ಸೀಟುಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮತಯಾಚಿಸಿದ ಶಾ, ಬಂಗಾಳದಲ್ಲಿ 90 ದಿನಗಳೊಳಗೆ ಅಧಿಕಾರಶಾಹಿ ಕೊನೆಯಾಗುತ್ತದೆ ಎಂದಿದ್ದಾರೆ.