ಈ ಮಧ್ಯೆ, ಕೋವಿಡ್ ಕುರಿತ ಮಾಹಿತಿ ನೀಡಲು ಪ್ರತಿ ದಿನ ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ, ‘ಪ್ರಧಾನಿ ಸಂವಾದದಲ್ಲಿ ಕೆಲವೇ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡುವುದಾಗಿ ಕೇಂದ್ರ ಸಂಪುಟ ಕಾರ್ಯದರ್ಶಿ ನಮಗೆ ಭಾನುವಾರ ತಿಳಿಸಿದ್ದರು. ವಿಡಿಯೊ ಸಂವಾದದಲ್ಲಿ ಮಾತನಾಡಲು ಬಯಸುವ ವಿಷವನ್ನು ಹಂಚಿಕೊಳ್ಳಲು ನಮಗೆ ಸೂಚಿಸಲಾಗಿತ್ತು. ಆ ಕುರಿತು ಕೇಂದ್ರ ಸಂಪುಟ ಕಾರ್ಯದರ್ಶಿಗೆ ಭಾನುವಾರವೇ ಮಾಹಿತಿ ನೀಡಿದ್ದೆವು’ ಎಂದು ಹೇಳಿದ್ದಾರೆ.