ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ,ನಯಾ ರಾಯಪುರಕ್ಕೆ ‘ಅಟಲ್ ನಗರ್’, ನ್ಯಾರೊ ಗೇಜ್ ಎಕ್ಸ್ಪ್ರೆಸ್– ವೇಗೆ ‘ಅಟಲ್ ಪಥ’, ನಯಾ ರಾಯಪುರದಲ್ಲಿ ವಾಜಪೇಯಿ ಪ್ರತಿಮೆ ಅನಾವರಣ, ಪಠ್ಯ ಪುಸ್ತಕಗಳಲ್ಲಿ ವಾಜಪೇಯಿ ಜೀವನ, ಚಿಂತನೆ ಅಳವಡಿಕೆ, ವಾಜಪೇಯಿ ಹೆಸರಿನಲ್ಲಿ ಉತ್ತಮ ಆಡಳಿತಗಾರರಿಗೆ ಪ್ರಶಸ್ತಿ, ವಾಜಪೇಯಿ ಅವರ ಹುಟ್ಟು ಹಬ್ಬದಂದು ಕವಿಗಳಿಗೆ ಸನ್ಮಾನ ಸೇರಿದಂತೆ ಹಲವು ಯೋಜನೆಗಳಲ್ಲಿ ಅವರ ಹೆಸರು ಬಳಸುವ ನಿರ್ಧಾರ ಕೈಗೊಳ್ಳಲಾಗಿತ್ತು.