‘ಮೋದಿ ಸರ್ಕಾರವು ರೈತರು, ವಿದ್ಯಾರ್ಥಿಗಳು, ಬಡವರು ಸೇರಿಂದತೆ ಎಲ್ಲ ವರ್ಗದ ಜನರನ್ನೂ ನಿರಾಶೆಗೊಳಿಸಿದೆ. ಈ ಬಾರಿ ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ಎನ್ಡಿಎ 100 ಸ್ಥಾನಗಳಿಗೆ ಕುಸಿಯಲಿದೆ’ ಎಂದು ಕೇಂದ್ರದ ಮಾಜಿ ಸಚಿವ ಸುಬೋಧ್ ಕಾಂತ್ ಸಹಯ್ ಹೇಳಿದರು. ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕೆ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಜೈಲು ಸೇರಬೇಕಾಯಿತು ಎಂದೂ ಟೀಕಿಸಿದರು.