ಮೂರು ರಥಗಳು, ಎಸಿ ಬಸ್ಗಳು ಬಿಜೆಪಿ ಪ್ರಚಾರ ಕಾರ್ಯದಲ್ಲಿ ಸಾಗಲು ಸಜ್ಜಾಗಿದ್ದವು. ಗಂಗಾ ಸಾಗರ ಪ್ರದೇಶದಿಂದ ಡಿಸೆಂಬರ್ 9ಕ್ಕೆ ಹಾಗೂ ತಾರಾಪೀಠದಿಂದ ಡಿಸೆಂಬರ್ 14ಕ್ಕೆ ರಥ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದುರ್ಗಾಪುರ, ಶ್ರೀರಾಮಪುರ, ಕೃಷ್ಣಾನಗರ ಸೇರಿ ಹಲವು ಕಡೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವನ್ನೂ ರಥ ಯಾತ್ರೆ ಒಳಗೊಂಡಿತ್ತು.