ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಕೇಳಿದ ಆರೋಪ: ಸಿಬಿಐನಿಂದ ಇಬ್ಬರು ರೈಲ್ವೆ ಅಧಿಕಾರಿಗಳ ಬಂಧನ

Last Updated 11 ಮಾರ್ಚ್ 2019, 10:53 IST
ಅಕ್ಷರ ಗಾತ್ರ

ನವದೆಹಲಿ: ಕಾಮಗಾರಿಯೊಂದರ ಬಿಲ್‌ ಪಾವತಿಗೆ ಗುತ್ತಿಗೆದಾರರಿಂದ ₹10 ಲಕ್ಷ ಲಂಚ ಕೇಳಿದ್ದ ಇಬ್ಬರು ಹಿರಿಯ ರೈಲ್ವೆ ಅಧಿಕಾರಿಗಳನ್ನು ಸಿಬಿಐ ಸೋಮವಾರ ಬಂಧಿಸಿದೆ.

ಅಲಹಾಬಾದ್‌ನಲ್ಲಿ ಉತ್ತರ ಕೇಂದ್ರ ರೈಲ್ವೆಯ ಹಿರಿಯ ವಿಭಾಗೀಯ ಸಿಗ್ನಲ್‌ ಮತ್ತು ಟೆಲಿಕಾಂ ಎಂಜಿನಿಯರ್‌ ಆಗಿರುವ ನೀರಜ್‌ ಪುರಿ ಗೋಸ್ವಾಮಿ ಮತ್ತು ವಿಭಾಗೀಯ ಸಿಗ್ನಲ್‌ ಮತ್ತು ಟೆಲಿಕಾಂ ಎಂಜಿನಿಯರ್‌ ಪಿ.ಕೆ.ಸಿಂಗ್‌ ಅವರನ್ನು ಗುತ್ತಿಗೆದಾರರ ದೂರು ಆಧರಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2017ರ ಮಾರ್ಚ್‌ನಲ್ಲಿ ಆರಂಭಿಸಿದ್ದ ಕಾಮಗಾರಿಯ ಬಿಲ್‌ ಮೊತ್ತ ₹1.43 ಕೋಟಿ ಬಿಡುಗಡೆಗೆ ಈ ಇಬ್ಬರು ಅಧಿಕಾರಿಗಳು ತಲಾ ₹5 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಲಂಚ ನೀಡದಿದ್ದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎಂದು ಕಾರಣ ನೀಡಿ, ಗುತ್ತಿಗೆ ರದ್ದುಪಡಿಸುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಗುತ್ತಿಗೆದಾರರು ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT