ಕವಿತಾಳ: ಸಮೀಪದ ಬಸಾಪುರ ಗ್ರಾಮದಲ್ಲಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಗುರುವಾರ ಅದ್ಧೂರಿಯಾಗಿ ಜರುಗಿತು.
ಇಲ್ಲಿನ ಸರ್ಕಾರಿ ಶಾಲೆಯಿಂದ ದೇವಸ್ಥಾನದವರೆಗೆ ಕುಂಭ, ಕಳಸ, ನಂದಿಕೋಲು ಸಮೇತ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಮುತ್ತೈದೆಯರು ಪಾಲ್ಗೊಂಡಿದ್ದರು.
ಗುಂಡಸಾಗರ ಗ್ರಾಮದ ಮೌನೇಶ ಮತ್ತು ತಂಡದವರು ನಡೆಸಿದ ಪುರವಂತಿಕೆ, ವೀರಗಾಸೆ, ನಂದಿಕೋಲು ಕುಣಿತ, ಮತ್ತು ಡೊಳ್ಳು ಕುಣಿತ ಆಕರ್ಷಿಸಿದವು. ಉತ್ಸವದ ನಿಮಿತ್ತ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಎಲೆ ಪೂಜೆ ಸೇರಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.