ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 30 ರವರೆಗೆ ಚಾರ್‌ಧಾಮ್‌ ಯಾತ್ರೆ ಇಲ್ಲ

Last Updated 9 ಜೂನ್ 2020, 18:09 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ‘ಚಾರ್‌ಧಾಮ್‌’ ಯಾತ್ರೆಯನ್ನು ಜೂನ್ 30ರ ವರೆಗೆ ಆರಂಭಿಸದೇ ಇರಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸಿಇಒ ರವಿನಾಥ್‌ ರಾಮನ್‌ ಹೇಳಿದ್ದಾರೆ.

ಹಿಮಾಲಯ ತಪ್ಪಲಲ್ಲಿರುವ ಬದರಿನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ಕ್ಷೇತ್ರಗಳನ್ನು ಒಟ್ಟುಗೂಡಿ ‘ಚಾರ್‌ಧಾಮ್‌’ ಎನ್ನಲಾಗುತ್ತದೆ. ಈ ದೇವಾಲಯಗಳು ತೆರೆದಿದ್ದು, ಭಕ್ತರಿಗೆ ಮಾತ್ರ ಪ್ರವೇಶ ನಿಷೇಧಿಸಲಾಗಿದೆ.

‘ಸೋಮವಾರ ನಡೆದ ಈ ದೇವಸ್ಥಾನಗಳ ಅರ್ಚಕರು, ಹಕ್ಕುದಾರರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಯಾತ್ರೆಯನ್ನು ಯಾವಾಗಿನಿಂದ ಆರಂಭಿಸಬೇಕು ಎಂಬ ಬಗ್ಗೆ ಜೂನ್‌ 30ರ ನಂತರವೇ ನಿರ್ಧರಿಸಲಾಗುವುದು’ ಎಂದು ರವಿನಾಥ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT