ಚೆನ್ನೈ: ಕಳೆದ ತಿಂಗಳು ಇರಾನ್ನಲ್ಲಿ ಬಂಧನಕ್ಕೊಳಗಾಗಿರುವ ಮೂವರು ಮೀನುಗಾರರ ಬಿಡುಗಡೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ತಮಿಳುನಾಡು ಸರ್ಕಾರ ಮನವಿ ಮಾಡಿದೆ.
ಈ ಕುರಿತು ಮುಖ್ಯಮಂತ್ರಿ ಪಳನಿಸ್ವಾಮಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.
ಕನ್ಯಾಕುಮಾರಿ ಜಿಲ್ಲೆಯವರಾದ ಈ ಮೂವರು ಸೌದಿ ಅರೇಬಿಯಾ ಒಡೆತನದ ಹಡಗಿನಲ್ಲಿ ಮೀನುಗಾರರಾಗಿದ್ದರು. ಕಳೆದ ಜನವರಿ 2ರಂದು ಥರೈನ್ ಮೀನುಗಾರಿಕ ನೆಲೆಯಲ್ಲಿ ಇವರನ್ನು ಅಪಹರಿಸಲಾಗಿತ್ತು. ಜ.7ರಂದು ಇರಾನ್ನಲ್ಲಿ ಪತ್ತೆಯಾದ ಇವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸೌದಿ ಅರೇಬಿಯಾ ಮತ್ತು ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಕೂಡಲೇ ಮುಗ್ಧ ಮೀನುಗಾರರ ಬಿಡುಗಡೆಗೆ ಪ್ರಯತ್ನಿಸಬೇಕೆಂದು ಅವರು ತಿಳಿಸಿದ್ದಾರೆ.