ಶಿವಮೊಗ್ಗದಲ್ಲಿ ಜೆ.ಎಚ್. ಪಟೇಲ್ ದಂಪತಿ ಬಂಧನ
ಶಿವಮೊಗ್ಗ, ಮೇ 17– ಶಿವಮೊಗ್ಗ ನಗರದಲ್ಲಿ ಎಸ್.ಎಸ್.ಪಿ. ಸತ್ಯಾಗ್ರಹದ ಮೂರನೇ ದಿನವಾದ ಇಂದು ಲೋಕಸಭಾ ಸದಸ್ಯ ಶ್ರೀ ಜೆ.ಎಚ್. ಪಟೇಲ್, ಅವರ ಪತ್ನಿ ಮತ್ತು ಇತರ 20 ಮಂದಿ ಸತ್ಯಾಗ್ರಹಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸತ್ಯಾಗ್ರಹ ನಡೆಸಿ, ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಶ್ರೀ ಜಿ.ವಿ. ವಿಶ್ವನಾಥ್ ಅವರನ್ನು ಸ್ಥಾನ ತ್ಯಜಿಸಲು ಶ್ರೀ ಪಟೇಲ್ ಒತ್ತಾಯಪಡಿಸಿದರು.