ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛೋಟುರಾಮ್ ಪ್ರತಿಮೆ ಅನಾವರಣ

Last Updated 9 ಅಕ್ಟೋಬರ್ 2018, 16:52 IST
ಅಕ್ಷರ ಗಾತ್ರ

ಸಂಪ್ಲಾ, ಹರಿಯಾಣ: ಬ್ರಿಟಿಷ್ ಅವಧಿಯ ರೈತ ನಾಯಕ ಛೋಟುರಾಮ್ ಅವರ 64 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅನಾವರಣ ಮಾಡಿದರು.

ರೋಹ್ಟರ್ ಜಿಲ್ಲೆಯ ಸಂಪ್ಲಾದಲ್ಲಿ ಅವರ ನೆನಪಿನಲ್ಲಿ ನಿರ್ಮಿಸಿರುವ ಮ್ಯೂಸಿಯಂಗೆ ಭೇಟಿ ನೀಡಿದರು. ಛೋಟುರಾಮ್ ಅವರ ಕುರಿತ ನಾಲ್ಕು ನಿಮಿಷಗಳ ಡಾಕ್ಯುಮೆಂಟರಿಯನ್ನು ಪ್ರಧಾನಿ ವೀಕ್ಷಿಸಿದರು.

1881ರ ನವೆಂಬರ್ 24ರಂದು ಜನಿಸಿದ ಇವರು, ರೈತ ನಾಯಕ ಎಂದು ಗುರುತಿಸಿಕೊಂಡಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ರೈತರ ಸಬಲೀಕರಣ ಹಾಗೂ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದರು. ಬ್ರಿಟಿಷ್ ಅವಧಿಯಲ್ಲಿ ರೈತಪರ ಕಾನೂನು ಜಾರಿಗೊಳ್ಳಲು ಕಾರಣಕರ್ತರಾಗಿದ್ದರು. ಇವರು ಕೇಂದ್ರ ಸಚಿವ ಬೀರೇಂದ್ರ ಸಿಂಗ್ ಅವರ ತಾತ.

ಪ್ರತಿಮೆ ನಿರ್ಮಾಣಕ್ಕೆಂದು 5,500 ರೈತರು ಕಬ್ಬಿಣದ ಲೋಹವನ್ನು ದಾನವಾಗಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT