‘ಕಾನೂನಿನ ಚೌಕಟ್ಟಿನೊಳಗೆ ಆರೋಪಿಯ ವಿಚಾರಣೆ ನಡೆಸುವ ಹಕ್ಕು ತನಿಖಾಧಿಕಾರಿಗೆ ಇರುತ್ತದೆ. ಆದ್ದರಿಂದ ಸಿಬಿಐಯ ಬೇಡಿಕೆಯು ಸಮರ್ಥನೀಯವಾದುದು. ಆರೋಪಿ ಚಿದಂಬರಂ ಅವರ ತನಿಖೆಗೆ ಸಿಬಿಐಗೆ ಇನ್ನಷ್ಟು ಅವಕಾಶ ನೀಡಬೇಕು ಎಂಬುದು ನನಗೆ ಮನವರಿಕೆಯಾಗಿದೆ. ಆದ್ದರಿಂದ ಅವರ ಕಸ್ಟಡಿಯ ಅವಧಿಯನ್ನು ಆಗಸ್ಟ್ 30ರವರೆಗೆ ವಿಸ್ತರಿಸುತ್ತಿದ್ದೇನೆ’ ಎಂದು ವಿಶೇಷ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ಹೇಳಿದರು.