ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಜತಾಂತ್ರಿಕತೆಗೆ ಸಂಬಂಧಿಸಿ ಸ್ಥಾಪಿತ ವ್ಯವಸ್ಥೆಗೆ ಮೋದಿ ದಕ್ಕೆ ತಂದಿದ್ದಾರೆ. ನೆರೆಯ ದೇಶಗಳ ಜೊತೆಗೆ ಒಂದು ಕಾಲದಲ್ಲಿ ಇದ್ದ ಬಾಂಧವ್ಯ ಈಗ ಕುಸಿದುಬಿದ್ದಿದೆ. ಸಾಂಪ್ರದಾಯಿಕವಾಗಿ ಜೊತೆಗಿದ್ದ ದೇಶಗಳ ಜೊತೆಗಿನ ಬಾಂಧವ್ಯವನ್ನು ಈಗ ಪರೀಕ್ಷೆಗೊಡ್ಡಲಾಗಿದೆ’ ಎಂದು ಹರಿಹಾಯ್ದರು.