ಫೆಬ್ರುವರಿ 5ರಂದು ನೀಡಿದ ಆದೇಶದಲ್ಲಿ ಸುಪ್ರೀಂ ಕೋರ್ಟ್, ಪ್ರಕರಣವು ತೀರ್ಪು ನೀಡುವ ಪಟ್ಟಿಯಲ್ಲಿದೆ. ಅದಕ್ಕೂ ಮೊದಲು ಮುಖ್ಯಕಾರ್ಯದರ್ಶಿ ಮಲಯ್ ಕುಮಾರ್ ದೇ, ಡಿಜಿಪಿ ವೀರೇಂದ್ರ ಕುಮಾರ್ ಮತ್ತು ಕೋಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಇದೇ ಫೆಬ್ರುವರಿ 20ಕ್ಕೂ ಮೊದಲು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಿತ್ತು. ಈ ಮೂವರೂ ಸೋಮವಾರವಷ್ಟೇ ನ್ಯಾಯಾಲಯಕ್ಕೆ ಖುದ್ದು ಹಾಜರಿ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದರು.