ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕೀದಾರ್ ಬೇಕಾಗಿರುವುದು ಶ್ರೀಮಂತರಿಗೆ, ರೈತರಿಗೆ ಅಲ್ಲ: ಪ್ರಿಯಾಂಕಾ ಗಾಂಧಿ

Last Updated 18 ಮಾರ್ಚ್ 2019, 11:32 IST
ಅಕ್ಷರ ಗಾತ್ರ

ಪ್ರಯಾಗ್‍ರಾಜ್: ಪ್ರಯಾಗ್‌ರಾಜ್ ಮತ್ತು ಮಿರ್ಝಾಪುರ್ ಜಿಲ್ಲೆಗಳಲ್ಲಿ ಗಂಗಾ ಯಾತ್ರೆ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ ಉತ್ತರ ಪ್ರದೇಶ (ಪೂರ್ವ ವಲಯ) ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ನರೇಂದ್ರ ಮೋದಿಯವರ ಚೌಕೀದಾರ್ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಹೆಸರಿನ ಮುಂದೆ ಏನು ಸೇರಿಸಬೇಕೋ ಅದು ಅವರ ಇಚ್ಛೆ.ರೈತ ಸಹೋದರರೊಬ್ಬರು ನನ್ನಲ್ಲಿ ಹೇಳಿದರು, ನೋಡಿ ಚೌಕೀದಾರ್ ಬೇಕಾಗಿರುವುದು ಶ್ರೀಮಂತರಿಗೆ. ನಾವು ರೈತರು, ನಮಗೆ ನಾವೇ ಚೌಕೀದಾರರು.

ಪ್ರಯಾಗ್‌ರಾಜ್ ಮತ್ತು ಮಿರ್ಝಾಪುರ್ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಸುಮಾರು 140 ಕಿ.ಮೀ. ದೋಣಿಯಾನ ನಡೆಸಿ ಮತ ಯಾಚಿಸಲಿರುವ ಪ್ರಿಯಾಂಕಾ, ನದಿ ದಡಗಳಲ್ಲಿ ವಾಸಿಸುತ್ತಿರುವವರೊಡನೆ ಸಂವಾದ ನಡೆಸಿ ಕಾಂಗ್ರೆಸ್‌ ಮತ ನೀಡುವಂತೆ ಕೋರಲಿದ್ದಾರೆ.

ಮನೈಯಾ ಘಾಟ್‍ನಿಂದ ಆರಂಭವಾದ ಈ ದೋಣಿಯಾನವಾರಣಾಸಿಯ ಅಸ್ಸಿ ಘಾಟ್‍ನಲ್ಲಿ ಕೊನೆಗೊಳ್ಳಲಿದೆ.

ಗಂಗಾ ಯಾತ್ರೆ ಆರಂಭಿಸುವ ಮುನ್ನ ಪ್ರಿಯಾಂಕಾ ಅವರು ಬಡೇ ಹನುಮಾನ್ ದೇವಾಲಯ ಮತ್ತು ಪ್ರಯಾಗ್ ರಾಜ್ ಸಂಗಮದಲ್ಲಿ ಪೂಜೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT