ಲಖನೌ: ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ₹10,000 ಕೋಟಿ ಬರುವುದು ಬಾಕಿ ಇದೆ. ಈ ವಿಷಯವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಈ ಹಣ ಸಿಕ್ಕಿದರೆ ರೈತರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆಹಾರ ಮತ್ತು ಮುಂದಿನ ಬೆಳೆ ಬೆಳೆಯುವುದಕ್ಕಾಗಿ ಬಳಸುತ್ತಿದ್ದರು.
ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಪ್ರಿಯಾಂಕಾ, ಚೌಕೀದಾರ್ ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದಿದ್ದಾರೆ.
गन्ना किसानों के परिवार दिनरात मेहनत करते हैं। मगर उप्र सरकार उनके भुगतान का भी जिम्मा नहीं लेती। किसानों का 10000 करोड़ बकाया मतलब उनके बच्चों की शिक्षा, भोजन, स्वास्थ्य और अगली फसल सबकुछ ठप्प हो जाता है। यह चौकीदार सिर्फ अमीरों की ड्यूटी करते हैं, गरीबों की इन्हें परवाह नहीं। pic.twitter.com/LIBbwamdrS
— Priyanka Gandhi Vadra (@priyankagandhi) March 24, 2019
ಲಖನೌದಲ್ಲಿರುವ ಕಬ್ಬು ಅಭಿವೃದ್ಧಿಆಯುಕ್ತರ ಕಚೇರಿಯಲ್ಲಿನ ಮಾರ್ಚ್ 22ರ ದಾಖಲೆ ಪ್ರಕಾರ ರಾಜ್ಯದ ಸಕ್ಕರೆ ಕಾರ್ಖಾನೆಗಳು2018-19ರಲ್ಲಿ ಕಬ್ಬು ಕಟಾವ್ ಮಾಡುತ್ತಿದ್ದ ತಿಂಗಳಲ್ಲಿ (ಅಕ್ಟೋಬರ್- ಸಪ್ಟೆಂಬರ್) ರೈತರಿಂದ ₹24,888.65 ಕೋಟಿ ಮೌಲ್ಯದ ಕಬ್ಬು ಖರೀದಿಸಿತ್ತು.ಸಾದಾ ಕಬ್ಬು ಕ್ವಿಂಟಾಲ್ಗೆ ₹315 ಮತ್ತು ಶೀಘ್ರ ಬೆಳೆ ನೀಡುವ ತಳಿಯ ಕಬ್ಬುಗಳಿಗೆ ಕ್ವಿಂಟಾಲ್ಗೆ ₹325 ರಂತೆ ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡಿತ್ತು.
ಕಬ್ಬು ನೀಡಿದ 14 ದಿನಗಳೊಳಗೆ ಕಬ್ಬು ಬೆಳೆಗಾರರಿಗೆ ಸರ್ಕಾರ ₹22,175.21ಪಾವತಿ ಮಾಡಬೇಕಿತ್ತು. ಆದರೆ ಅವರಿಗೆ ಸಿಕ್ಕಿದ್ದು ₹12,339.04 ಕೋಟಿ.2017-18ರಲ್ಲಿ ಬಾಕಿಯಿದ್ದ ಹಣ ₹238.81 ಕೋಟಿ. ಹಾಗಾಗಿ ಒಟ್ಟು ₹10,074.98 ಕೋಟಿ ಹಣ ರೈತರಿಗೆ ಸಿಗಲು ಬಾಕಿ ಇದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
₹10,074.98 ಕೋಟಿಯಲ್ಲಿ ಮೀರತ್, ಭಾಗ್ಪಥ್, ಖೈರಾನಾ, ಮುಜಾಫರ್ನಗರ್, ಬಿನೋಜ್ ಮತ್ತು ಸಹರಣ್ಪುರ್ನಲ್ಲಿರುವ ಮಿಲ್ಗಳಿಂದ ರೈತರಿಗೆಶೇ.45ಕ್ಕಿಂತಲೂ ಹೆಚ್ಚು ಹಣ ಬರಲು ಬಾಕಿ ಇದೆ. ಈ ಪ್ರದೇಶಗಳಲ್ಲಿ ಏಪ್ರಿಲ್ 11 ರಂದು ಮತದಾನ ನಡೆಯಲಿದೆ.