2008, ನವೆಂಬರ್ 26ರಂದು ಇಬ್ಬರು ಉಗ್ರರು ಎಕೆ–47 ಬಂದೂಕು ಹಿಡಿದುಛತ್ರಪತಿ ಶಿವಾಜಿ ಟರ್ಮಿನಲ್ಸ್ನ ಪ್ರಯಾಣಿಕ ಕೊಠಡಿಗೆ ಬಂದು ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದರು. ಜೊತೆಗೆ ಜನ ಸಂದಣಿ ಇರುವೆಡೆ ಗ್ರನೈಡ್ ಎಸೆದಿದ್ದರು. ಇದರಿಂದ 58 ಮಂದಿ ಮೃತಪಟ್ಟಿದ್ದು, 104 ಮಂದಿ ಗಾಯಗೊಂಡಿದ್ದರು. ಆ ವೇಳೆ ಅವರು ಇದೇ ಮೇಲ್ಸೇತುವೆಯ ಮೂಲಕ ಪಕ್ಕದಲ್ಲಿನ ಕ್ಯಾಮ ಆಸ್ಪತ್ರೆಗೆ ತಲುಪಿದ್ದರು. ಈ ಚಿತ್ರ ಸುದ್ದಿ ಛಾಯಗ್ರಾಹಕ ಸೆಬಸ್ಟೀನ್ ಡಿಸೋಜ ಅವರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.