ದೆಹಲಿ: ‘ರಾಜೀವ್ ಗಾಂಧಿ ನಂ. ಭ್ರಷ್ಟರಾಗಿ ಪ್ರಾಣ ಬಿಟ್ಟಿದ್ದರು,’ ಎಂಬ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ವ್ಯಗ್ರಗೊಂಡಿದೆ. ‘ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ,’ ಎಂದು ರಾಹುಲ್ ಹೇಳಿದರೆ, ‘ವಂಚನೆಯನ್ನು ಜನ ಎಂದಿಗೂ ಮರೆಯುವುದಿಲ್ಲ,’ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಶನಿವಾರಚುನಾವಣಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದಮೋದಿ, ‘ನಿಮ್ಮ ತಂದೆಯನ್ನುಮಿ.ಕ್ಲೀನ್ ಎಂದು ಕರೆಯಲಾಗುತ್ತದೆ. ಆದರೆ, ನಿಮ್ಮ ತಂದೆ ಸತ್ತಿದ್ದೇ ನಂ.1 ಭ್ರಷ್ಟಾಚಾರಿಯಾಗಿ,’ ಎಂದು ಮಾಜಿ ಪ್ರಧಾನಿ, ದಿವಂಗತರಾಜೀವ್ ಗಾಂಧಿ ಅವರನ್ನು ಉಲ್ಲೇಖಿಸುವ ಮೂಲಕ ರಾಹುಲ್ ಗಾಂಧಿ ಅವರನ್ನು ಕೆಣಕಿದ್ದರು.
ಇದೇ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ‘ಮೋದಿ ಜೀ, ಯುದ್ಧ ಅಂತ್ಯವಾಗಿದೆ. ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ. ನಿಮ್ಮ ಅಂತರಾಳ ನೀವು ಏನು ಎಂಬುದನ್ನು ತಿಳಿಸುತ್ತಿದೆ. ನಮ್ಮ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ. ಪ್ರೀತಿ ಮತ್ತು ಅಪ್ಪುಗೆಯೊಂದಿಗೆ, ರಾಹುಲ್’ ಎಂದು ಸಾತ್ವಿಕ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
Modi Ji,
— Rahul Gandhi (@RahulGandhi) May 5, 2019
The battle is over. Your Karma awaits you. Projecting your inner beliefs about yourself onto my father won’t protect you.
All my love and a huge hug.
Rahul
‘ಹುತಾತ್ಮರ ಹೆಸರಲ್ಲಿ ಮತ ಕೇಳುವಈ ದೇಶದ ಪ್ರಧಾನ ಮಂತ್ರಿ, ಹುತಾತ್ಮರಾದ ಮತ್ತೊಬ್ಬ ಮೇರು ವ್ಯಕ್ತಿಯ ಬಗ್ಗೆ ಅವಹೇಳನ ಮಾಡಿದ್ದಾರೆ. ಅಮೇಥಿಯ ಜನ ಇದಕ್ಕೆ ಸೂಕ್ತವಾದ ಉತ್ತರ ಕೊಡುತ್ತಾರೆ. ರಾಜೀವ್ ಗಾಂಧಿ ಅವರು ಅಮೇಥಿಯ ಜನಕ್ಕಾಗಿ ಪ್ರಾಣ ಅರ್ಪಿಸಿದರು. ನರೇಂದ್ರ ಮೋದಿ ಅವರೇ ನನಪಿರಲಿ ಈ ದೇಶದ ಜನ ವಂಚನೆಯನ್ನು ಸಹಿಸುವುದಿಲ್ಲ,’ ಎಂದು ರಾಜೀವ್ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ಮೂಲಕ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
शहीदों के नाम पर वोट माँगकर उनकी शहादत को अपमानित करने वाले प्रधानमंत्री ने कल अपनी बेलगाम सनक में एक नेक और पाक इंसान की शहादत का निरादर किया। जवाब अमेठी की जनता देगी जिनके लिए राजीव गांधी ने अपनी जान दी। हाँ मोदीजी ‘यह देश धोकेबाज़ी को कभी माफ नहीं करता’।
— Priyanka Gandhi Vadra (@priyankagandhi) May 5, 2019
‘ಮೃತ ವ್ಯಕ್ತಿಯನ್ನು ಅವಹೇಳನ ಮಾಡುವ ಮೂಲಕ ನರೇಂದ್ರ ಮೋದಿ ಅವರು ಪ್ರಾಮಾಣಿಕತೆ ಮತ್ತು ಸಭ್ಯತೆಯ ಎಲ್ಲ ಎಲ್ಲೆಗಳನ್ನೂ ಮೀರಿದ್ದಾರೆ,’ಎಂದು ಕೇಂದ್ರದ ಮಾಜಿ ಸಚಿವ ಚಿದಂಬರಂಬ ಟೀಕಿಸಿದ್ದಾರೆ.
Mr Modi has crossed all limits of propriety and decency by defaming a man (Rajiv Gandhi) who died in 1991.
— P. Chidambaram (@PChidambaram_IN) May 5, 2019
‘ರಾಜೀವ್ ಗಾಂಧಿ ಅವರ ಬಗ್ಗೆ ಮೋದಿ ಆಡಿರುವ ಮಾತುಗಳು ನಮ್ಮನ್ನು ಗಾಸಿಗೊಳಿಸಿವೆ. ಸಾಮಾನ್ಯವಾಗಿ ಪ್ರಧಾನಿಯಾದವರು ದೇಶದ ಜನರ ಬಗ್ಗೆ ಅತ್ಯಂತ ಜವಾಬ್ದಾರಿಯುತವಾಗಿ ಮಾತನಾಡುತ್ತಾರೆ. ಅಸಂಬಂದ್ಧವಾಗಿ ಮಾತನಾಡಲಾರರು. ಆದರೆ, ಮೋದಿ ರಾಜೀವ್ ಗಾಂಧಿ ಅವರ ಕುರಿತ ಮಾತನಾಡಿದ್ದಾರೆ. ಅವರೇಕೆ ಹೀಗೆ ಮಾತನಾಡಿದರು. ಇದು ನಾಚಿಕ್ಕೇಡಿನ ಹೇಳಿಕೆ. ನಾನೂ ಕೂಡ ಗುಜರಾತಿನವನು. ಗಾಂಧಿ ನಾಡಿನಿಂದ ಬಂದವನು. ಈ ನಾಡಿನಿಂದ ಬಂದವರು ಹೀಗೆ ಮಾತನಾಡಬಲ್ಲರೇ ಎಂದು ನಮಗೆ ಬೇಸರವಾಗುತ್ತಿದೆ,’ ಎಂದು ಸಾಗರೋತ್ತರ ಕಾಂಗ್ರೆಸ್ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
Sam Pitroda, Indian Overseas Congress chief: Why did he say that? We are ashamed of the statement, I am a Gujarati too & come from Gandhi ji's state. People of this state can lie so much & speak such lowly things, this saddens us. https://t.co/t4LCgBD3nV
— ANI (@ANI) May 5, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.