‘ಹಿಂದಿನ ಸರ್ಕಾರಗಳಲ್ಲೂ ಅಭಿವೃದ್ಧಿಗೆ ಪ್ರಯತ್ನಿಸಲಾಗಿತ್ತು. ಆದರೆ, ಅದು ಒಂದು ನಿರ್ದಿಷ್ಟ ಕುಟುಂಬವನ್ನು ಪೋಷಿಸಲು ಮತ್ತು ಉತ್ತೇಜನ ನೀಡಲು ಮಾತ್ರ ಈ ಸರ್ಕಾರಗಳು ಸೀಮಿತವಾಗಿದ್ದವು. ಬಡವರಿಗೆ ಆಶ್ರಯ ಒದಗಿಸಿ ಸಬಲೀಕರಣ ಮಾಡುವ ಉದ್ದೇಶ ಕಾಂಗ್ರೆಸ್ ಸರ್ಕಾರಕ್ಕೆ ಇರಲಿಲ್ಲ. ಕೇವಲ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಉದ್ದೇಶ ಮಾತ್ರ ಇತ್ತು’ ಎಂದು ನೆಹರು ಕುಟುಂಬವನ್ನು ಟೀಕಿಸಿದರು.