ಬುಲಂದ್ಶಹರ್ ಜಿಲ್ಲೆಯ ಸ್ಯಾನಾ ಪೊಲೀಸ್ ಠಾಣಾಧಿಕಾರಿಯಾಗಿದ್ದ ಸುಬೋಧ್ ಅವರನ್ನು ಉದ್ರಿಕ್ತ ಗುಂಪು ಕಳೆದ ಡಿಸೆಂಬರ್ನಲ್ಲಿ ಕೊಂದಿತ್ತು. ಈ ಗುಂಪಿನಲ್ಲಿ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಒಟ್ಟು 88 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಲಾಗಿತ್ತು. ಅವರಲ್ಲಿ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ನ ತಲಾ ಒಬ್ಬ ಕಾರ್ಯಕರ್ತರು ಮತ್ತು ಬಿಜೆಪಿಯ ಒಬ್ಬ ಮುಖಂಡ ಸೇರಿದ್ದಾರೆ.