ಒಂದು ವೇಳೆ ನ್ಯಾಯಾಲಯಕ್ಕೆ ಆಗಮಿಸಲೇಬೇಕೆನ್ನುವವರು ಅಗತ್ಯ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡ ನಂತರ ಬರಬೇಕು. ಇದಕ್ಕೆ ನ್ಯಾಯಾಲಯದ ಆಡಳಿತ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.ನ್ಯಾಯಾಲಯ ಎಂದರೆ ಸಾವಿರಾರು ಮಂದಿ ತಮ್ಮ ಪ್ರಕರಣಗಳ ಸಂಬಂಧ ಹಾಜರಾಗಲು ಆಗಮಿಸುತ್ತಿರುತ್ತಾರೆ. ಅವರ ಜೊತೆ ಸಂಬಂಧಿಕರು, ಸ್ನೇಹಿತರು ಕೂಡ ಆಗಮಿಸುತ್ತಾರೆ. ಅಷ್ಟೇ ಪ್ರಮಾಣದಲ್ಲಿ ಕೆಲಸ ಇಲ್ಲದೆ ಇರುವವರೂ ನ್ಯಾಯಾಲಯಕ್ಕೆ ಆಗಮಿಸುತ್ತಾರೆ.ಇವರಲ್ಲಿ ಸೋಂಕು ಪೀಡಿತರೂ ಬರಬಹುದು. ಅದಕ್ಕಾಗಿಯೇ ಅಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಮತ್ತೊಬ್ಬರಿಗೆ ಹರಡದಂತೆ ತಡೆಗಟ್ಟಬೇಕೆಂದು ರಶ್ಮಿ ಬನ್ಸಾಲ್ ಕೋರಿದ್ದಾರೆ.