ನವದೆಹಲಿ: ‘ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿರುವ 20 ಪ್ರದೇಶಗಳನ್ನುಸೂಕ್ಷ್ಮ ವಲಯಗಳು ಎಂದು ಗುರುತಿಸಲಾಗಿದ್ದು, ಇನ್ನೂ 22 ಸ್ಥಳಗಳು ಇದೇ ರೀತಿ ಸೂಕ್ಷ್ಮ ವಲಯಗಳಾಗುವ ಅಪಾಯದಲ್ಲಿವೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
ಸಮುದಾಯಕ್ಕೆ ಸೋಂಕು ಹರಡುತ್ತಿದೆ ಎನ್ನುವುದಕ್ಕೆ ಪ್ರಬಲ ಆಧಾರ ದೊರಕದೆ ಇದ್ದರೂ, ಸೋಂಕು ಹರಡುವಿಕೆ ತಡೆಗಟ್ಟಲು ದೊಡ್ಡಮಟ್ಟದಲ್ಲಿ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ ಎಂದು ಸಚಿವಾಲಯ ತಿಳಿಸಿದೆ.
ಪರಿಸ್ಥಿತಿ ನಿರ್ವಹಿಸಲು ಮಾನವ ಸಂಪನ್ಮೂಲ ಬಳಸಿಕೊಳ್ಳುವ ನಿಟ್ಟಿನಲ್ಲಿ, ವಹಿಸಬೇಕಾದ ಜವಾಬ್ದಾರಿ, ನೀಡಬೇಕಿರುವ ಅವಶ್ಯ ತರಬೇತಗಳ ಕುರಿತು ರಾಜ್ಯಗಳಿಗೆ ನೀಡಿರುವ ಮಾರ್ಗಸೂಚಿಗಳಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.