ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್‌ ಯಾತ್ರೆಗೆ ಭಾರತೀಯರನ್ನು ಕಳುಹಿಸದೇ ಇರಲು ನಿರ್ಧಾರ: ಕೇಂದ್ರ ಸಚಿವ ನಖ್ವಿ

Last Updated 23 ಜೂನ್ 2020, 9:33 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಪಿಡುಗು ಹೆಚ್ಚುತ್ತಿರುವ ಕಾರಣ ಈ ವರ್ಷ ಭಾರತದಿಂದ ಹಜ್‌ ಯಾತ್ರೆಗಾಗಿ ಯಾರನ್ನೂ ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿಮಂಗಳವಾರ ತಿಳಿಸಿದರು.

ಸೌದಿ ಅರೇಬಿಯಾದ ಹಜ್‌ಸಚಿವ ಮೊಹಮ್ಮದ್‌ ಸಲೇಹ್‌ ಅವರೊಂದಿಗೆ ಕಳೆದ ರಾತ್ರಿ ದೂರವಾಣಿ ಮೂಲಕ ಚರ್ಚೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಜ್‌ಯಾತ್ರೆಗಾಗಿ ಈ ಬಾರಿ ಯಾರನ್ನೂ ಕಳುಹಿಸದಂತೆ ಸಲೇಹ್‌ ಅವರೂ ಮನವಿ ಮಾಡಿದ್ದಾರೆ ಎಂದು ನಖ್ವಿ ಹೇಳಿದರು.

ಕೋವಿಡ್‌ ಹಿನ್ನೆಲೆಯಲ್ಲಿ, ಪವಿತ್ರವಾದ ಹಜ್‌ ಯಾತ್ರೆಯಲ್ಲಿ ಅಂತರರಾಷ್ಟ್ರೀಯ ಯಾತ್ರಾರ್ಥಿಗಳು ಭಾಗವಹಿಸುವುದಕ್ಕೆ ಸೌದಿ ಅರೇಬಿಯಾ ನಿರ್ಬಂಧ ಹೇರುವ ನಿರ್ಧಾರವನ್ನು ಆ ದೇಶವು ಸೋಮವಾರ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT