‘ಈ ಸಮಸ್ಯೆ ಪರಿಹಾರಕ್ಕೆ ಒಂದು ಸಮಗ್ರ ಯೋಜನೆ ರೂಪಿಸಿ ಪ್ರತಿದಿನ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವಶ್ಯಕ ವಸ್ತುಗಳನ್ನು ಸುಲಲಿತವಾಗಿ ತರಲು ಸಮನ್ವಯ ತಂಡಗಳನ್ನು ರಚನೆ ಮಾಡಿಲಾಗಿದೆ. ಕೇಂದ್ರ ಸರ್ಕಾರವು ವೆಂಟಿಲೇಟರ್ ಹಾಗೂ ಹಾಗೂ ವೈದ್ಯಕೀಯ ಉಪಕರಣಗಳನ್ನು ಜಮ್ಮು ಮತ್ತು ಶ್ರೀನಗರಕ್ಕೆ ವಿಮಾನದ ಮೂಲಕ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಇಲಾಖೆ ಆಯುಕ್ತ ಅಟಲ್ ದುಲ್ಲೊ ’ಪ್ರಜಾವಾಣಿ’ ಗೆ ತಿಳಿಸಿದರು.