‘ಈ ವ್ಯಕ್ತಿಯ ವಿಷಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಉಪಯುಕ್ತವಾಗಿದೆ ಎನ್ನುವುದು ಸಂತಸ. ಈ ಸವಾಲಿನ ಸಂದರ್ಭದಲ್ಲಿ ಹೊಸ ಚಿಕಿತ್ಸಾ ವಿಧಾನ ಕಂಡುಕೊಳ್ಳುವಲ್ಲಿ ಇದು ಆಶಾದಾಯಕ ಬೆಳವಣಿಗೆ. ಆದರೆ ಈ ಚಿಕಿತ್ಸೆ ಜಾದೂ ಮಾಡುವುದಿಲ್ಲ ಎನ್ನುವುದನ್ನು ನಾವು ಅರಿಯುವುದು ಮುಖ್ಯ. ಕೇವಲ ಈ ಚಿಕಿತ್ಸೆಯಿಂದಲೇ ವ್ಯಕ್ತಿಯ ಆರೋಗ್ಯ ಸುಧಾರಿಸಿದ್ದು ಎಂದು ಹೇಳಲಾಗುವುದಿಲ್ಲ. ಕೋವಿಡ್-19 ಚಿಕಿತ್ಸೆಯ ಇತರೆ ಮಾನದಂಡಗಳನ್ನು ಸಹ ಅನುಸರಿಸಲಾಗಿದೆʼ ಎಂದು ಆಸ್ಪತ್ರೆಯ ಗ್ರೂಪ್ ಮೆಡಿಕಲ್ ಡೈರೆಕ್ಟರ್ ಡಾ ಸಂದೀಪ್ ಬುಧಿರಾಜಾ ತಿಳಿಸಿದ್ದಾರೆ.