ನವದೆಹಲಿ: ನಿಜಾಮುದ್ದೀನ್ನ ಮರ್ಕಜ್ನಿಂದ ಆಸ್ಪತ್ರೆಗೆ ಕರೆ ತರಲಾಗಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್ನಲ್ಲಿ ಮಾತನಾಡಿರುವ ರಾಜೀವ್ ಗಾಂಧಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯ, 'ಮರ್ಕಜ್ನಿಂದ ಕರೆ ತರಲಾಗಿರುವ ಕರೊನಾ ಸೋಂಕಿತರು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸುತ್ತಿಲ್ಲ' ಎಂದು ತಿಳಿಸಿದ್ದಾರೆ.
'ಮರ್ಕಜ್ನಿಂದ ಬಂದಿರುವ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ. ಆದರೆ, ವೈದ್ಯರು ಅವರ ಪ್ರಾಣ ಪಣಕ್ಕಿಟ್ಟುಆತನ ಪ್ರಯತ್ನವನ್ನು ತಪ್ಪಿಸಿದ್ದಾರೆ' ಎಂದಿದ್ದಾರೆ.
ನಿಜಾಮುದ್ದೀನ್ ಪ್ರದೇಶದಲ್ಲಿ ಕಳೆದ ತಿಂಗಳು ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ 53 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಬುಧವಾರದ ವರೆಗೂ ದೆಹಲಿಯಲ್ಲಿ ಒಟ್ಟು 152 ಪ್ರಕರಣಗಳು ದಾಖಲಾಗಿವೆ.
#WATCH A person related to Markaz Nizamuddin, admitted at Rajiv Gandhi Super Speciality Hospital, Delhi attempted to commit suicide today. He was saved by the hospital authorities. pic.twitter.com/qHSGIYaTJn
ಆಸ್ಪತ್ರೆಭದ್ರತೆಗೆ ಸಂಬಂಧಿಸಿದ ವಿಚಾರವನ್ನೂ ಪ್ರಸ್ತಾಪಿಸಲಾಗಿದ್ದು, ಗೃಹ ಕಾರ್ಯದರ್ಶಿಗಳ ಜೊತೆ ವೈದ್ಯರು ಹಾಗೂ ರೋಗಿಗಳಿಗೆ ಭದ್ರತೆ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕೆಲವು ರೋಗಿಗಳು ಆಕ್ರಮಣಕಾರಿಗಳಾಗಿ ವರ್ತಿಸುತ್ತಿದ್ದು, ಅದರಿಂದಾಗಿ ಯಾರೂ ಸಹ ಅವರ ಸಮೀಪ ಹೋಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ವೈದ್ಯರು ಎಳೆದು ಪ್ರಾಣ ಉಳಿಸಿದ್ದಾರೆ ಎಂದಿದ್ದಾರೆ.