‘ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು’ ಎಂದು ಸಿಪಿಎಂ ನಾಯಕತ್ವ ಶುಕ್ರವಾರ ಹೇಳಿತ್ತು. ಇದನ್ನು ಶನಿವಾರ ನಿರಾಕರಿಸಿರುವ ವಿಜಯನ್, ‘ಶಬರಿಮಲೆ ವಿಚಾರದಲ್ಲಿ ಸರ್ಕಾರದ ನಿಲುವು ಸರಿಯಾಗಿತ್ತು. ಆದರೆ ಆ ಕುರಿತು ವಿರೋಧಪಕ್ಷಗಳವರು ನಡೆಸಿದ ತಪ್ಪು ಪ್ರಚಾರ ಅಭಿಯಾನದಿಂದ ಪಕ್ಷಕ್ಕೆ ಹಿನ್ನಡೆಯಾಯಿತು’ ಎಂದಿದ್ದಾರೆ.