‘ದೆಹಲಿ, ಮಥುರಾ ಹಾಗೂ ವೃಂದಾವನ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಯಮುನಾ ನದಿ ಭಾರಿ ಪ್ರಮಾಣದಲ್ಲಿ ಮಲಿನಗೊಂಡಿದೆ. ಈ ನೀರು ನೀರಾವರಿಯೂ ಯೋಗ್ಯವಲ್ಲ. ಇನ್ನು, ಸ್ನಾನ ಮಾಡಿದರೆ, ಕುಡಿದರೆ ಆರೋಗ್ಯ ಹದಗೆಡುವುದು ಖಾತರಿ’ ಎಂದು ಸೌತ್ ಏಷ್ಯನ್ ನೆಟ್ವರ್ಕ್ ಆನ್ ಡ್ಯಾಮ್ಸ್, ರಿವರ್ಸ್ ಆ್ಯಂಡ್ ಪೀಪಲ್ನ ಸಮನ್ವಯಾಧಿಕಾರಿ ಹಿಮಾಂಶು ಠಕ್ಕರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡುತ್ತಾ ತಿಳಿಸಿದರು.