‘ಪ್ರಜಾಪ್ರಭುತ್ವವು ಈ ಹಿಂದೆ ಎಂದೂ ಇಷ್ಟು ಅಪಾಯದಲ್ಲಿ ಇರಲಿಲ್ಲ. ಸಂಯಮದಿಂದ ಇರಬೇಕು ಎಂಬ ನಮ್ಮ ದೃಢನಿಶ್ಚಯವನ್ನು ಬಿಜೆಪಿ ಪರೀಕ್ಷಿಸುತ್ತಲೇ ಇದೆ. ನಾವು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರೆ ಸಾಲದು. ಜನರ ಬಳಿ ಹೋಗಬೇಕು. ನಾವು ಧೈರ್ಯವಾಗಿ ಬೀದಿಗೆ ಇಳಿದು ಹೋರಾಡಬೇಕು. ಹಳ್ಳಿಹಳ್ಳಿಗಳಲ್ಲಿ ಹೋರಾಡಬೇಕು. ಪಟ್ಟಣ–ನಗರಗಳಲ್ಲಿ ಹೋರಾಡಬೇಕು’ ಎಂದು ಅವರು ಕರೆ ನೀಡಿದ್ದಾರೆ.