ಸಚಿವರ ಉತ್ತರಕ್ಕೆ ತೃಪ್ತರಾದ ಮಲ್ಕಾಪೂರೆ, ‘ಬೀದರ್ ಜಿಲ್ಲೆಯ 123 ಕೆರೆಗಳ ಪೈಕಿ 83 ಕೆರೆಗಳಿಂದ ರೈತರಿಗೆ ಒಂದು ಹನಿ ನೀರು ಕೊಟ್ಟಿಲ್ಲ’ ಎಂದರು. ಆಗ ಸಚಿವರು, ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ನೀರು ಇದ್ದಲ್ಲಿ ವ್ಯವಸಾಯಕ್ಕೆ ಕೊಡುವುದಿಲ್ಲ. ದನಕರುಗಳಿಗೆ ಕುಡಿಯಲು, ಅಂತರ್ಜಲಕ್ಕೆ ಬೇಕಾಗುತ್ತದೆ ಎಂದರು. ಆಗ ಮಲ್ಕಾಪೂರೆ ‘ಸಚಿವರು ಸದನಕ್ಕೆ ತಪ್ಪು ಉತ್ತರ ನೀಡುತ್ತಿದ್ದಾರೆ. ಅವರು ಕೊಟ್ಟಿರುವ ಮಾಹಿತಿ ಪ್ರಕಾರವೇ ಕೆರೆಗಳಲ್ಲಿ ನೀರಿದೆ. ನೀರಿದ್ದೂ ಕೊಡದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.