ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಗ್ನಿ ದುರಂತ: ಹೋಟೆಲ್‌ ಮಾಲೀಕ ಬಂಧನ

Last Updated 17 ಫೆಬ್ರುವರಿ 2019, 20:26 IST
ಅಕ್ಷರ ಗಾತ್ರ

ನವದೆಹಲಿ:ಮಧ್ಯ ದೆಹಲಿಯ ಕರೋಲ್‌ಬಾಗ್‌ ಪ್ರದೇಶದಲ್ಲಿದ್ದ ’ಅರ್ಪಿತ್‌ ಪ್ಯಾಲೇಸ್‌ ಹೋಟೆಲ್‌‘ನಲ್ಲಿ ಈಚೆಗೆ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಾಲೀಕ ರಾಕೇಶ್‌ ಗೋಯಲ್‌ ಅವರನ್ನು ಬಂಧಿಸಲಾಗಿದೆ.

ಕತಾರ್‌ನಿಂದ ಇಂಡಿಗೊ ವಿಮಾನದಲ್ಲಿ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿಯುತ್ತಿದ್ದಂತೆಯೇ, ಕ್ರೈಂ ಬ್ರ್ಯಾಂಚ್‌ ಅಧಿಕಾರಿಗಳು ಗೋಯಲ್‌ ಅವರನ್ನು ಬಂಧಿಸಿದರು.

‘ಇದಕ್ಕೂ ಮುನ್ನವೇ ವಲಸೆ ಅಧಿಕಾರಿಗಳು ಅವರ ವಿರುದ್ಧ ಲುಕ್‌ಔಟ್‌ ಅಧಿಸೂಚನೆ ಹೊರಡಿಸಿ, ಎಚ್ಚರಿಕೆಯಿಂದ ಇರುವಂತೆ ಸೂಚಿಸಿತ್ತು. ಅದರಂತೆ, ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಗೋಯಲ್‌ ಅವರನ್ನು ವಶಕ್ಕೆ ಪಡೆದ ವಲಸೆ ಅಧಿಕಾರಿಗಳು ಕ್ರೈಂ ಬ್ರ್ಯಾಂಚ್‌ ಅಧಿಕಾರಿಗಳಿಗೆ ಹಸ್ತಾಂತರಿಸಿದರು’ ಎಂದು ಡಿಸಿಪಿ ರಾಜೇಶ್‌ ದೇವ್‌ ತಿಳಿಸಿದರು.

ಫೆಬ್ರುವರಿ 12ರಂದು ಬೆಳಿಗ್ಗೆ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 17 ಮಂದಿ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT