ವಿವಾದಿತ ಸಿಎಎ ಅನ್ನು ಹಿಂಪಡೆಯದ ಹೊರತು ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದ ಮಹಿಳೆಯರಲ್ಲಿ ಹೋರಾಟದ ಕಿಚ್ಚು ಕ್ರಮೇಣ ಕಡಿಮೆಯಾದಂತೆ ಕಂಡು ಬರುತ್ತಿದೆ. ನೆರೆಯ ಪ್ರದೇಶಗಳಾದ ಮೌಜ್ಪುರ, ಚಾಂದ್ಬಾಗ್, ಗೋಕುಲ್ಪುರಿ ಮತ್ತು ಭಜನ್ಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ, ಸಾವು–ನೋವಿನಿಂದ ಭಯಭೀತರಾಗಿರುವ ಇಲ್ಲಿನ ಮಹಿಳೆಯರು, ‘ಎಲ್ಲಿಯ ವರೆಗೆ ಒಬ್ಬ ವ್ಯಕ್ತಿ ಯಾತನೆಯನ್ನು ಸಹಿಸಿಕೊಂಡು ಇರಲು ಸಾಧ್ಯ’ ಎಂದು ಹತಾಶೆ–ಆಕ್ರೋಶದಿಂದ ಪ್ರಶ್ನೆಸುತ್ತಾರೆ.