‘ಆಕಾಶ ಗಿಡಕ್ಕೆ ಗಿಳಿ ಕಿತ್ತಿತ್ತಲೇ ಪರಾಕ್’ ಕಾರಣಿಕ ನುಡಿಯನ್ನು ಭಕ್ತರು ತಮಗೆ ತೋಚಿದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ‘ದೈವವಾಣಿಯಲ್ಲಿ ಹಸಿರಿನ ಉಲ್ಲೇಖವಿರುವುದರಿಂದ ಶುಭ ಸೂಚಕವಾಗಿದೆ. ಈ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಹಸಿರು ಉಕ್ಕುವ ಮುನ್ಸೂ
ಚನೆ ಇದೆ. ಆಕಾಶದಂತಿರುವ ದೊಡ್ಡ ರಾಜಕೀಯ ಪಕ್ಷದಲ್ಲಿ ಪಲ್ಲಟಗಳೂ ನಡೆಯಬಹುದು’ ಎಂದು ಕಾರಣಿಕ ಉಕ್ತಿಯನ್ನು ಮೈಲಾರದ ಹಿರಿಯರಾದ ಮಾಟ್ನಾರ ಬಸಪ್ಪ ಅರ್ಥೈಸುತ್ತಾರೆ.