ಸಂಜೆ 6ರ ಸುಮಾರಿಗೆ ಜೋರಾದ ಗಾಳಿ ಬೀಸಿದ ಪರಿಣಾಮ ಸವದತ್ತಿ ರಸ್ತೆ, ಬಸ್ ನಿಲ್ದಾಣದ ಸಮೀಪ, ಸರಕಾರಿ ಆಸ್ಪತ್ರೆ ಸಮೀಪ ಮರಗಳು ಉರುಳಿವೆ. ಸವದತ್ತಿ ರಸ್ತೆ ಬಳಿ ಹಾಗೂ ವಿನಾಯಕ ನಗರದಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಆ ತಂತಿ ರಸ್ತೆ ಮೇಲೆ ಬಿದ್ದ ಪರಿಣಾಮ ಸಂಚರಿಸಲು ಆಗದಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಕೆಲವು ಮನೆಗಳ ತಗಡುಗಳು ಹಾರಿ ಹೋಗಿವೆ.