ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿರುವುದು ಪ್ರಪಂಚದಾದ್ಯಂತ ಇರುವ ತಮಿಳರಿಗೆ ಆಘಾತವಾಗಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ. ರಾತ್ರೋರಾತ್ರಿ ಶ್ರೀಲಂಕಾದ ಸರ್ಕಾರದಲ್ಲಿ ನಡೆದ ಬದಲಾವಣೆಯು ಹಲವು ರಹಸ್ಯಗಳನ್ನು ಒಳಗೊಂಡಿದೆ. ತಮ್ಮ ಹಕ್ಕುಗಳನ್ನು ಕೇಳುತ್ತಿರುವ ತಮಿಳರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು.