ಕರ್ನಾಲ್:ಹರ್ಯಾಣದ ಕರ್ನಾಲ್ನಲ್ಲಿ ರಾಜೀವ್ ಗುಪ್ತ (56) ಎಂಬವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸ್ವಂತ ಆಸ್ಪತ್ರೆ ಹೊಂದಿರುವ ವೈದ್ಯ ರಾಜೀವ್ ಗುಪ್ತಾ ಅವರು ಶನಿವಾರ ಕಾರಿನಲ್ಲಿ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.ತೀವ್ರ ಗಾಯಗೊಂಡ ಗುಪ್ತಅವರು ಭಾನುವಾರ ಅಸು ನೀಗಿದ್ದಾರೆ ಎಂದಿದ್ದಾರೆ ಪೊಲೀಸರು,
Haryana: Dr Rajiv Gupta, Managing Director of Amritdhara Hospital in Karnal who was shot at by bike-borne assailants yesterday in Sector 16, later died in hospital. Police investigation underway. pic.twitter.com/TPlTVCEqaK
ಬಿಜೆಪಿ ಸರ್ಕಾರ ಇಲ್ಲಿನ ನಾಗರಿಕರ ರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಎಸ್ಯುವಿ ಕಾರಿನಲ್ಲಿ ವೈದ್ಯರು ಸಂಚರಿಸುತ್ತಿದ್ದಾಗ ಮುಖಮುಚ್ಚಿ ಆಯುಧಧಾರಿಗಳಾಗಿ ಬಂದಿದ್ದ ಮೂವರು ದುಷ್ಕರ್ಮಿಗಳು ಕಾರು ನಿಲ್ಲಿಸಿ ಗುಂಡು ಹಾರಿಸಿದ್ದಾರೆ. ಅವರು ಹಾರಿಸಿದ ಮೂರು ಬುಲೆಟ್ಗಳಲ್ಲಿ ಎರಡು ಬುಲೆಟ್ ಗುಪ್ತ ಅವರ ದೇಹ ಹೊಕ್ಕಿದೆ.
ತಮ್ಮ ಚಾಲಕನೊಂದಿಗೆ ಚೌರಾ ಬಜಾರ್ ಹೋಗುತ್ತಿದ್ದಾಗ ರಾಜೀವ್ ಗುಪ್ತಾ ಅವರ ಮೇಲೆ ಈ ದಾಳಿ ನಡೆದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.