ನವದೆಹಲಿ: ‘ಸಂತ್ರಸ್ತರಿಗೆ ಮುಕ್ತ ಮನಸ್ಸಿ ನಿಂದ ಹೆಚ್ಚಿಗೆ ಪರಿಹಾರ ಒದಗಿಸುವ ನ್ಯಾಯಾಧೀಶರನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಸರಿಯಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
14 ವರ್ಷಗಳ ಹಿಂದೆ ಸೇವೆಯಿಂದ ವಜಾಗೊಂಡಿದ್ದ ಮಹಿಳಾ ನ್ಯಾಯಾಧೀಶೆ ಸಾಧನಾ ಚೌಧರಿ ಅವರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬಡೆ ಅವರನ್ನು ಒಳಗೊಂಡ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.