<p><strong>ಭುವನೇಶ್ವರ:</strong> ಒಡಿಶಾ ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಫೋನಿ ಚಂಡಮಾರುತಕ್ಕೆ 12 ಮಂದಿ ಬಲಿಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.</p>.<p>ಆದರೆ ಇಲ್ಲಿನ ವಿಶೇಷ ಪರಿಹಾರ ಆಯುಕ್ತ ವಿಷ್ಣುಪಾದ ಸೇಥಿ, ಮೂವರ ಸಾವನ್ನು ದೃಢಿಕರಿಸಿದ್ದಾರೆ.</p>.<p>ಒಡಿಶಾದ 12 ಜಿಲ್ಲೆಗಳು ಚಂಡಮಾರುತಕ್ಕೆ ತತ್ತರಗೊಂಡಿದ್ದು, ಒಂದೇ ದಿನದಲ್ಲಿ 10ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.</p>.<p><strong>ಇದನ್ನೂ ಓದಿ: <a href="https://www.prajavani.net/stories/national/cyclone-fani-hits-bengal-634059.html" target="_blank">ಫೋನಿಯ ರುದ್ರನರ್ತನಕ್ಕೆ ಬಂಗಾಳ ತಲ್ಲಣ</a></strong></p>.<p>ಶುಕ್ರವಾರ ಬೆಳಿಗ್ಗೆ 8.30ಕ್ಕೆ ಒಡಿಶಾದ ಪುರಿಗೆ 220 ಕಿ.ಮೀ ವೇಗದಲ್ಲಿ ಪ್ರವೇಶಿಸಿದ ಚಂಡಮಾರುತವು ಹಲವು ಅವಾಂತರ ಸೃಷ್ಟಿಸಿದೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮೇ6) ಒಡಿಶಾಕ್ಕೆ ಭೇಟಿ ನೀಡಿ ಫೋನಿ ಚಂಡಮಾರುತದ ಪರಿಣಾಮಗಳನ್ನು ವೀಕ್ಷಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ಒಡಿಶಾ ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಫೋನಿ ಚಂಡಮಾರುತಕ್ಕೆ 12 ಮಂದಿ ಬಲಿಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.</p>.<p>ಆದರೆ ಇಲ್ಲಿನ ವಿಶೇಷ ಪರಿಹಾರ ಆಯುಕ್ತ ವಿಷ್ಣುಪಾದ ಸೇಥಿ, ಮೂವರ ಸಾವನ್ನು ದೃಢಿಕರಿಸಿದ್ದಾರೆ.</p>.<p>ಒಡಿಶಾದ 12 ಜಿಲ್ಲೆಗಳು ಚಂಡಮಾರುತಕ್ಕೆ ತತ್ತರಗೊಂಡಿದ್ದು, ಒಂದೇ ದಿನದಲ್ಲಿ 10ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.</p>.<p><strong>ಇದನ್ನೂ ಓದಿ: <a href="https://www.prajavani.net/stories/national/cyclone-fani-hits-bengal-634059.html" target="_blank">ಫೋನಿಯ ರುದ್ರನರ್ತನಕ್ಕೆ ಬಂಗಾಳ ತಲ್ಲಣ</a></strong></p>.<p>ಶುಕ್ರವಾರ ಬೆಳಿಗ್ಗೆ 8.30ಕ್ಕೆ ಒಡಿಶಾದ ಪುರಿಗೆ 220 ಕಿ.ಮೀ ವೇಗದಲ್ಲಿ ಪ್ರವೇಶಿಸಿದ ಚಂಡಮಾರುತವು ಹಲವು ಅವಾಂತರ ಸೃಷ್ಟಿಸಿದೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮೇ6) ಒಡಿಶಾಕ್ಕೆ ಭೇಟಿ ನೀಡಿ ಫೋನಿ ಚಂಡಮಾರುತದ ಪರಿಣಾಮಗಳನ್ನು ವೀಕ್ಷಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>