ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿದ ಘೋಷಣೆಗಳಿಂದ ವಿಶೇಷವಾಗಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ಮತ್ತು ಉದ್ಯಮಗಳು ಹಲವಾರು ಕಾಲಗಳಿಂದ ಅನುಭವಿಸುತ್ತಿದ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ. ಲಿಕ್ವಿಡಿಟಿಯನ್ನು ವರ್ಧಿಸಲು, ವಾಣಿಜ್ಯೋದ್ಯಮಿಗಳ ಸಬಲೀಕರಣ ಮತ್ತು ಸ್ಪರ್ಧಾತ್ಮಕ ಸ್ಫೂರ್ತಿಯನ್ನು ಬಲಪಡಿಸಲು ಇದು ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.