ಸುಪ್ರೀಂಕೋರ್ಟ್ನಲ್ಲಿ ಬುಧವಾರ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಸರ್ಕಾರದ ಪರ ವಾದ ಮಂಡಿಸಿ, ‘ದಿ ಹಿಂದೂ ದಿನಪತ್ರಿಕೆ ಮತ್ತುಎಎನ್ಐ ಸುದ್ದಿಸಂಸ್ಥೆಗಳು ರಫೇಲ್ಗೆ ಸಂಬಂಧಿಸಿದಂತೆ ಪ್ರಕಟಿಸಿರುವ ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಬಾರದು. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ. ಆ ಎರಡೂ ಪ್ರಕಾಶನ ಸಂಸ್ಥೆಗಳು ಮತ್ತು ವಕೀಲರೊಬ್ಬರ ವಿರುದ್ಧ (ಪ್ರಶಾಂತ್ ಭೂಷಣ್ ಇರಬಹುದು) ಅಧಿಕೃತ ಗೌಪ್ಯ ಕಾಯ್ದೆಯ ಅನ್ವಯ ಸರ್ಕಾರವು ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ’ ಎಂದು ಹೇಳಿದ್ದರು.