ಚಂಡೀಗಡ: ಮೂವರು ವಿಚಾರಣಾಧೀನಕೈದಿಗಳುಅಮೃತಸರಕೇಂದ್ರೀಯ ಕಾರಾಗೃಹದಿಂದ ಪರಾರಿಯಾಗಿದ್ದಾರೆ.
ಒಬ್ಬಆರೋಪಿಯನ್ನ ಅತ್ಯಾಚಾರಮತ್ತು ಇಬ್ಬರು ಆರೋಪಿಗಳನ್ನುಕಳ್ಳತನ ಮತ್ತು ಡಕಾಯಿತಿಯಆರೋಪದಲ್ಲಿ ಬಂಧಿಸಲಾಗಿತ್ತು. ಆರೋಪಿಗಳುಶನಿವಾರ ಮತ್ತು ಭಾನುವಾರ ರಾತ್ರಿ ಜೈಲಿನ ಗೋಡೆಯನ್ನು ಕೊರೆದು ಪರಾರಿಯಾಗಿದ್ದಾರೆ.
ಆರೋಪಿಗಳು ಜೈಲಿನ 16 ಅಡಿ ಗೋಡೆಯನ್ನು ಒಬ್ಬರ ಮೇಲೆ ಒಬ್ಬರು ನಿಂತು ಹತ್ತಿದ್ದಾರೆ.21 ಅಡಿ ಎತ್ತರವಿರುವ ಜೈಲಿನ ಗೋಡೆಯ ಮೇಲೆ ಮೊಳೆಗಳನ್ನು ಹೊಡೆದು ಅದನ್ನು ಏಣಿಯ ಹಾಗೆ ಬಳಸಿಪರಾರಿಯಾಗಿದ್ದಾರೆ.
" ಜೈಲಿನ ನಂ 10 ಭದ್ರತಾ ಗೋಪುರದ ಸಮೀಪದಿಂದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ, ಅದು ಸಿಸಿಟಿವಿ ವ್ಯಾಪ್ತಿಯಲ್ಲಿ ಇರಲಿಲ್ಲ" ಎಂದು ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ.
ಪೊಲೀಸರು ನಡೆಸಿರುವ ಪ್ರಾಥಮಿಕತನಿಖೆಯಲ್ಲಿ ಆರೋಪಿಗಳಿಗೆ ಹೊರಗಿನಿಂದ ಸಹಾಯ ಲಭಿಸಿರುವಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಅಮರಿಂದರ್ಸಿಂಗ್ ಅವರು ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.ಅಲ್ಲದೆ,ರಾಜ್ಯದಲ್ಲಿನ ಜೈಲುಗಳ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ ಅದನ್ನು ಬಲ ಪಡಿಸಲುಮುಂದಾಗಿದ್ದಾರೆ.