ಕಳಪೆ ಆಹಾರದ ವಿರುದ್ಧ ದನಿ ಎತ್ತಿದ್ದ ಬಹದ್ದೂರ್, ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದರು. ಬಿಎಸ್ಎಫ್ ನಿರಾಕರಿಸಿತ್ತು. ಇದನ್ನು ಅವರು ಪ್ರತಿಭಟಿಸಿದ್ದರು. ಅಶಿಸ್ತಿನ ಕಾರಣ ನೀಡಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಹೀಗಾಗಿ ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ನೈಜ ಚೌಕೀದಾರ ಹಾಗೂ ನಕಲಿ ಚೌಕೀದಾರನ ನಡುವಿನ ಸ್ಪರ್ಧೆ ಎಂದು ಅವರು ತಮ್ಮ ಸ್ಪರ್ಧೆಯನ್ನು ಕರೆದಿದ್ದರು.