ಈ ಎನ್ಕೌಂಟರ್ ನಡೆದಾಗ ವಂಜಾರ ಗುಜರಾತ್ ಎಟಿಎಸ್ನ ಮುಖ್ಯಸ್ಥರಾಗಿದ್ದರು. 2007ರಲ್ಲಿ ಬಂಧಿತರಾಗಿದ್ದ ಅವರು 7 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ನಂತರ ಬಿಡುಗಡೆಯಾದರು.
‘ಗುಜರಾತ್ ಪೊಲೀಸರು ಮತ್ತು ರಾಷ್ಟ್ರವಿರೋಧಿ ಪಡೆಗಳು ನನ್ನ ವಿರುದ್ಧ ಆರೋಪಿಸಿದ್ದ ಎಲ್ಲಾ ಎನ್ಕೌಂಟರ್ ಪ್ರಕರಣಗಳಲ್ಲಿ ನ್ಯಾಯಾಂಗದಿಂದ ನಾನು ಕ್ಲೀನ್ ಚೀಟ್ ಪಡೆದಿದ್ದೇನೆ.ಸೆಪ್ಟೆಂಬರ್ 29, 2007ರಿಂದ ಐಜಿಪಿಯಾಗಿ ನನಗೆ ಬಡ್ತಿ ನೀಡಲಾಗಿದೆ. ಇದಕ್ಕಾಗಿ ನಾನು ಭಾರತ ಸರ್ಕಾರ ಹಾಗೂ ಗುಜರಾತ್ ಸರ್ಕಾರ ಎರಡಕ್ಕೂ ಕೃತಜ್ಞನಾಗಿದ್ದೇನೆ’ ಎಂದು ಮಂಗಳವಾರ ರಾತ್ರಿ ಟ್ವೀಟ್ ಮಾಡಿರುವ ವಂಜಾರ, ಗೃಹ ಇಲಾಖೆಯ ಆದೇಶದ ಅಧಿಸೂಚನೆಯನ್ನೂ ಲಗತ್ತಿಸಿದ್ದಾರೆ.