ಬಂಧನದ ತಕ್ಷಣ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಆರೋಪಿ ನಾಡಾರ್ ಹೇಳಿದರೂ ಆತನ ಹೇಳಿಕೆಗಳಲ್ಲಿ ತೀವ್ರ ಗೊಂದಲ ಮೂಡಿತ್ತು. ಮತ್ತಷ್ಟು ವಿಚಾರಣೆ ನಡೆಸಿದ ನಂತರ, ದಾದರ್ನಲ್ಲಿ ನಕಲಿ ಬಂಗಾರ ಖರೀದಿಸಿ ಅಸಲಿ ಪ್ರಮಾಣ ಪತ್ರ ನೀಡಿದ್ದಾಗಿ ಒಪ್ಪಿಕೊಂಡಿದ್ದು, ಈ ಅಕ್ರಮದಲ್ಲಿ 12 ಗ್ರಾಹಕರು ಶಾಮೀಲಾಗಿದ್ದಾರೆ ಎಂದು ಧಾರಾವಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸುರೇಶ್ ಪಾಟೀಲ್ ತಿಳಿಸಿದ್ದಾರೆ.